ಜೋಲಿಯಾಟದ ಜಗತ್ತು

ಆಗೊಮ್ಮೆ ಈಗೊಮ್ಮೆ ಜಗದ
ನಿಯಮಗಳು ಬದಲಾಗುತ್ತವೆ.
ಬಿಸಿನೀರಿನಲ್ಲೂ ಜೀವಜಗತ್ತು
ತೆರೆದು ಕೊಳ್ಳುತ್ತದೆ.

ಸಾಗರದ ಬುಡವೂ ನಿಗಿನಿಗಿ ಉರಿಯುತ್ತದೆ.
ಎದೆಯ ಕಡಲಿಗೂ ಬೆಂಕಿ
ಇಳಿಯುತ್ತದೆ,

ಅನ್ವೇಷಣೆಯ ಆಲಂಬನ
ವ್ಯತ್ಯಾಸಗೊಂಡಿದ್ದು ವ್ಯಸನದಿಂದಲೇ
ದೃಷ್ಟಾರರು ನೆಪಮಾತ್ರ ಆಗಿ ಬಿಡುತ್ತಾರೆ

ಮಾತು ಸತ್ತ ಮನಸ್ಸುಗಳು
ಭಾವಶೂನ್ಯತೆಯಲ್ಲಿ ರೂಪಾಂತರಗೊಳ್ಳುತ್ತವೆ
ಕರಕಲು ಕಲ್ಲಿದ್ದಲಿ ರಾಶಿ ಕೆಂಡದಂಗಡಿ
ಮೇಲಿಂದ ಮೇಲೆ ಎದ್ದು
ಒಳಹೊರಗಿನ ರತ್ನಗಂಬಳಿಗಳು
ಕೊಚ್ಚೆ ಮೆತ್ತಿಕೊಂಡಿವೆ.

ಅಕ್ಷರದ ನೆಲೆಯಲ್ಲೂ ರೂಕ್ಷ
ರಕ್ತ ಪಿಪಾಸುಗಳು
ಮಾಂಸಕ್ಕೆ ಮುತ್ತುವ ನೊಣಗಳು
ಮೈತಾಳುತ್ತವೆ.

ಸಂತೆಯಲ್ಲಿ ಅಪ್ಪಚ್ಚಿಯಾಗುತ್ತವೆ
ಹಾರುವ ಅಭಿಲಾಷೆಗೆ ರೆಕ್ಕೆ ಕಟ್ಟಿಕೊಂಡ
ಚಿಟ್ಟೆಗಳು
ಪ್ರೇಮ ಮತ್ತು ಮಸಣಗಳು
ಒಂದೇ ತೊಟ್ಟಿಲಲ್ಲಿ ಜೋಕಾಲಿಯಾಡುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದ್ದವರು, ಇಲ್ಲದವರು
Next post ಜಾತಿಗಳೇ ಜೈಲಾಗದಿರಿ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys